Sunday, March 11, 2007

ಅಭ್ಯುದಯ

ಇರುಳು ಕಳೆದು
ಬೆಳಕು ಹರಿಯಲಿ
ಬಾಳ ಕತ್ತಲೆ ಕಳೆಯಲಿ
ನಿನ್ನ ನಗುವಿನ ಒಂದು ಕಿರಣದಿ
ಬದುಕು ಧನ್ಯತೆ ಪಡೆಯಲಿ
ಮೋಡ ಸರಿಯಲಿ ಬಾನು ಬೆಳಗಲಿ
ದೇವ ದರುಶನವಾಗಲಿ

ಶುಭ್ರ ಬದುಕಿಗೆ ನಾಂದಿಯಾಗಲಿ
ಭವ್ಯ ಭಾವನೆ ಬೆಳೆಯಲಿ
ಸ್ನಿಗ್ದ ಚೆಲುವಿನ ರೂಪ ಮೂಡಲಿ
ರಂಗಿನೋಕುಳಿ ಬೀರಲಿ
ತಂಪುಗಾಳಿಯು ಕಂಪು ಸೂಸುತ
ಧರೆಯ ಸ್ವರ್ಗವ ಮಾಡಲಿ
ಮನದ ಮೌಢ್ಯವ ತೊಳೆಯಲಿ


- ಲಕ್ಷ್ಮೀಶ ನಡಹಳ್ಳಿ
ಬೆಂಗಳೂರು

2 comments:

Anonymous said...

Lakshmeesha,
Nimma kavana bahaLa sogasaagide.
Heege nimma baravanige munnadayali.

~Kirana

Yarivanu said...

@Kiran,

dhanyavadagaLu Kiran avare.